ರೂಪಂ ಬಿಂದುರಿತಿ ಜ್ಞೇಯಮ್ ರೂಪಾತೀತಂ ನಿರಂಜನಮ್ - ಶ್ರೀ ಗುರು ಗೀತ ತಿಳಿಸುತ್ತದೆ ಬಿಂದುವೇ ನಿನ್ನ ರೂಪ. ಹಾಗಾದರೆ ನಿನ್ನ ಕೇಂದ್ರ ಬಿಂದು ಯಾವುದು ಎನ್ನುವುದರ ಕುರಿತು ಚಿಂತನೆ ಮಾಡು.ಎಲ್ಲ ಪ್ರಾಣಿಗಳಲ್ಲಿಯೂ ಆತ್ಮವಿದೆ.ಆದರೆ ಮನುಷ್ಯನಲ್ಲಿ ಮಾತ್ರ ಅತ್ಮ ಮತ್ತು ಚೈತನ್ಯ ಎರಡೂ ಇವೆ .ಈ ಚೈತನ್ಯವು ಶಾಶ್ವತ .ಇದು ನಮ್ಮನ್ನು ದೈವತ್ವದೊಡನೆ ಮಿಲನ ಮಾಡಿಸುವುದು.ಮನುಷ್ಯನಿಗೆ ರೂಪವಿರುವಂತೆ ದೇವರಿಗೂ ರೂಪವಿದೆ.ಆದರೆ ರೂಪತೀತವಾಗಿರುವುದು ಚೈತನ್ಯ.ಈ ಶುದ್ಧ ಚೈತನ್ಯವೇ ಬ್ರಹ್ಮನ್.ಈ ಚೈತನ್ಯದ ಅರಿವಿನಿಂದ ದೇಹಿಯು ಬ್ರಹ್ಮಮಯನಾಗುತ್ತಾನೆ.
Subscribe to:
Post Comments (Atom)
No comments:
Post a Comment